“ಪರ್ಣಗಳಿಗೆ ಆಕಾರ ಕೊಡುವಾಗ ಬ್ರಹ್ಮನು ತನ್ನ ರಾಜ್ಯದ ಕಲಾಕಾರರನ್ನೆಲ್ಲ ಆಹ್ವಾನಿಸಿ ಅವರು ಕಲ್ಪಿಸಬಹುದಾದಂತೆ ಎಲ್ಲ ನಕ್ಷೆಗಳ ಚಿತ್ರ ಬಿಡಿಸಲು ಹೇಳಿರಬೇಕು. ಅವುಗಳೆಲ್ಲ ಒಂದಕ್ಕಿಂತ ಇನ್ನೊಂದು ಅಂದವಾಗಿದ್ದರಿಂದ ಒಮ್ಮೆಲೇ ಮನಸೋತು ಅವುಗಳನ್ನು ಪರ್ಣನಿರ್ಮಾಣದಲ್ಲಿ ಬಳಸಿರಬೇಕು.”
ಡಾ. ಕೃಷ್ಣಾನಂದ ಕಾಮತ್, ಸಸ್ಯ_ಪ್ರಪಂಚ
ಸಸ್ಯದಲ್ಲಿ ಮುಖ್ಯ ಭಾಗ ಯಾವುದು? ನಮ್ಮ ದೃಷ್ಟಿಯಲ್ಲಿ ಹೂವು, ಹಣ್ಣು, ಕಾಳು, ಬೀಜಗಳು ತಾನೆ? ಆದರೆ ಸಸ್ಯಕ್ಕೆ ಅದರ ಬೇರು, ಕಾಂಡದಂತೆ ಎಲೆಯೂ ಅವಶ್ಯಕ. ಆಹಾರ ತಯಾರಿಸಿ ಸಸ್ಯವನ್ನು ಪೋಷಿಸಿ ಬೆಳೆಸುವಲ್ಲಿ ಎಲೆಯ ಪ್ರಾಮುಖ್ಯತೆ ನಮಗೆಲ್ಲ ಗೊತ್ತು. ಇರಲಿ, ನಮ್ಮ ನರೂರಿನ ಕೆಲವು ಎಲೆಗಳ ಕಿರು ಪರಿಚಯ ಈ ಹೊಸ ಸರಣಿಯ ಉದ್ದೇಶ.
ನಾನು ಸಸ್ಯಶಾಸ್ತ್ರದ ವಿದ್ಯಾರ್ಥಿಯಲ್ಲ. ಹೀಗಾಗಿ ವಿವಿಧ ಮೂಲಗಳಿಂದ ಹೆಕ್ಕಿ ತಂದ ತಾಂತ್ರಿಕ ವಿವರಣೆಯಲ್ಲಿ ತಪ್ಪಬಹುದು. ಅಥವಾ ಇಂಗ್ಲೀಷಿನಿಂದ ಅನುವಾದ ಮಾಡುವಲ್ಲಿ ಎಡವಬಹುದು. ಅನುಭವಿಗಳು ಇಂಥದನ್ನು ಗಮನಿಸಿ ತಿದ್ದಿದರೆ ನಾನು ಆಭಾರಿ. ಪೂರಕ ಮಾಹಿತಿ ನೀಡುವವರಿಗೆ ಕೃತಜ್ಞತೆಗಳು.
– ವಿನಾಯಕ ಭಟ್ಟ, ನರೂರ
ವಿನಾಯಕ ಭಟ್ಟ ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನರೂರ ಗ್ರಾಮದವರು. ವಿಜ್ಞಾನ ಪದವೀಧರರು ಆಗಿರುವ ಇವರು ನಿವೃತ್ತ ಬ್ಯಾಂಕ್ ನೌಕರರು. ೨೦೦೪ರಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೆ ಓದು, ಪರಿಸರ, ಛಾಯಾಗ್ರಹಣ, ಪ್ರವಾಸ ಮತ್ತು ಗ್ರಾಮೀಣ ಬದುಕಿನ ಕುರಿತು ಆಸಕ್ತಿ.
೨೦೨೧ರಲ್ಲಿ ಫೇಸ್ ಬುಕ್ ನಲ್ಲಿ ಪರ್ಣ ಲೋಕ ಎಂಬ ಹೆಸರಲ್ಲಿ ಸುಮಾರು ೧೦೦ ಕಂತುಗಳಾಗಿ ವಿನಾಯಕ ಭಟ್ಟರು ಬರೆದಿದ್ದರು, ಆ ಲೇಖನಗಳು ಓದುಗರಿಗೆ ಮತ್ತೊಮ್ಮೆ ಸಿಗಲಿ ಎಂಬ ದೃಷಿಯಿಂದ ಬುಕ್ಸ್ ಲೋಕ ಪ್ರಕಟ ಮಾಡುತ್ತಿದೆ. ಈ ಎಲ್ಲಾ ಲೇಖನಗಳು ಮರುಪ್ರಕಟಣೆ ಮಾಡಲು ಅವಕಾಶ ನೀಡಿದ ವಿನಾಯಕ ಭಟ್ಟರಿಗೆ ಧನ್ಯವಾದಗಳು.
– ಭಾರ್ಗವಿ, ಬುಕ್ಸ್ ಲೋಕ